ಕಡಬ; ವ್ಯಕ್ತಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ 3 ವರ್ಷ ಶಿಕ್ಷೆ ವಿಧಿಸಿ ಪುತ್ತೂರು 2ನೇ ಎಸಿಜೆ &ಜೆಎಂಎಫ್ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕಡಕಲ್ ತಾಲೂಕು ಕುನ್ನಪುರಂ ನಿವಾಸಿ ವಾರೆಂಟ್ ಆರೋಪಿ ಅಜಿತನ್ ಶಿಕ್ಷೆಗೆ ಒಳಗಾದವ. ಆರೋಪಿ ರಬ್ಬರ್ ಟ್ಯಾಪಿಂಗ್ ವೃತ್ತಿ ಮಾಡಿಕೊಂಡಿದ್ದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈತನ ಜೊತೆಯಲ್ಲಿ ಪರಿಚಯಸ್ಥ ಬಂಟ್ರ ಗ್ರಾಮದ ಪ್ರಸಾದ್ ಎಂಬವರು ಮಾತನಾಡುವ ವೇಳೆ ಅಮಾಲು ಪದಾರ್ಥ ಹೆಚ್ಚಾಗಿ ನೀಡಿಲ್ಲವೆಂದು ತಗಾದೆ ತೆಗೆದು ಟ್ಯಾಪಿಂಗ್ ಮಾಡುವ ಕತ್ತಿಯಿಂದ ಚುಚ್ಚಿರುವುದಾಗಿ ಆರೋಪಿಸಲಾಗಿತ್ತು. ಗಾಯಗೊಂಡ ವ್ಯಕ್ತಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಈತನನ್ನು ಕಡಬ ಪೊಲೀಸರು 2024 ನವೆಂಬರ್ ತಿಂಗಳಿನಲ್ಲಿ ಕೊಲ್ಲಂಕೇರಳ ರಾಜ್ಯದ ತಿರುವನಂತಪುರದಲ್ಲಿ ದಸ್ತಿಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಉಪ್ಪಿನಂಗಡಿ ವೃತ್ತ ನಿರೀಕ್ಷರ ನಿರ್ದೇಶನಂತೆ ಕಡಬ ಎಸ್.ಐ ಅಭಿನಂದನ್ ಅವರ ಮಾರ್ಗದರ್ಶನದಂತೆ ಎಚ್ ಸಿ ರಾಜು ಬಿ. ವಿ. ನ್ಯಾಯಾಲಯಕ್ಕೆ ದೋಷಾರೋಪಣಪತ್ರ ಸಲ್ಲಿಸಿದ್ದರು.ಇದೀಗ ಈತನಿಗೆ ಕಲಂ 326 ಗೆ 3 ವರ್ಷ ಕಾರಾಗೃಹ , ಪ್ರಕರಣದ ಸಂತ್ರಸ್ತರಿಗೆ 10,000/-ನೀಡಲು ಅಪೇಕ್ಷಿಸಲಾಗಿದೆ. ಇನ್ನು ಕಲಂ 506 ಗೆ 6 ತಿಂಗಳ ಕಾರಾಗೃಹ ಮತ್ತು 1000/- ದಂಡ. ತಪ್ಪಿದಲ್ಲಿ 15ದಿನಗಳು ಹೆಚ್ಚುವರಿ ಜೈಲುವಾಸಕ್ಕೆ ಆದೇಶ ನೀಡಬೇಕಾಗುತ್ತದೆ ಆದೇಶದಲ್ಲಿ ಉಲ್ಲೇಖಿಸಿದೆ.