ಬೆಳ್ತಂಗಡಿ: ರಾಜ್ಯದ ವಿವಿಧ ಜೆಲ್ಲೆಗಳ ರೈತರ ಜಮೀನು 1974 ರಲ್ಲಿ ಗುಪ್ತವಾಗಿ ಮಾಡಿದಂತಹ ನೋಟಿಫಿಕೇಶನ್ ಮತ್ತು ಈಗಿನ ಕಾಂಗ್ರೆಸ್ ಸರಕಾರ ಮುಸ್ಲಿಂ ಸಮುದಾಯವನ್ನು ಅತಿಯಾಗಿ ಓಲೈಕೆ ಮಾಡುತ್ತಿರುವುದರ ಪರಿಣಾಮವಾಗಿ ಸಾವಿರಾರು ರೈತರು ಆತ್ಮಹತ್ಯೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.
ಅವರು ನ. 03 ಭಾನುವಾರದಂದು ಬೆಳ್ತಂಗಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈಗಿನ ಕಾಂಗ್ರೆಸ್ ಸರಕಾರ ಜನರಿಗೆ ಗ್ಯಾರಂಟಿ ಸೌಲಭ್ಯವನ್ನು ನೀಡುವ ನೆಪದಲ್ಲಿ ಅಧಿಕಾರಕ್ಕೆ ಬಂದಿದ್ದು, ಪ್ರಸ್ತುತ ಜನರಿಗೆ ಬೇಕಾದ ಗ್ಯಾರಂಟಿ ಸೌಲಭ್ಯವನ್ನು ನೀಡದೆ ವಂಚಿಸುತ್ತಿದೆ. ಸರಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು ಯಾವುದೇ ರೀತಿಯ ಪರಿಹಾರಕ್ಕೆ ಹಣ ನೀಡುತ್ತಿಲ್ಲ. ಮಳೆ ಹಾನಿ, ರಸ್ತೆ ಅಭಿವೃದ್ಧಿ, ಸರಕಾರಿ ಶಾಲಾ ಕಟ್ಟಡ ದುರಸ್ಥಿ, ಅಂಗವಿಕಲರ ಅನುದಾನ ಕೂಡ ಕೊಡುತ್ತಿಲ್ಲ ಎಂದು ಆರೋಪಿಸಿದರು.
ಸಮಾಜದಲ್ಲಿ ಇದೀಗ ವಕ್ಫ್ ಬೋರ್ಡ್ ಆಸ್ತಿ ಗೊಂದಲದಿಂದ ಅಶಾಂತಿ ಸೃಷ್ಟಿಯಾಗುತ್ತಿದೆ. ಅಷ್ಟೇ ಅಲ್ಲದೆ ಸ್ವತಃ ಸಿದ್ದರಾಮಯ್ಯ ಅವರ ಕುಟುಂಬ ಮೂಡ ಹಗರಣದಲ್ಲಿ ಭಾಗಿಯಾಗಿದೆ. ಹೀಗೆ ಕಾಂಗ್ರೆಸ್ ಸರಕಾರ SC, ST ಅನುದಾನ ದುರುಪಯೋಗ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿ ಜನರ ಮುಂದೆ ಬಂದು ನಿಲ್ಲಲೂ ಭಯ ಪಡುತ್ತಿದೆ ಎಂದರು.
ಕಾಂಗ್ರೆಸ್ ಸರ್ಕಾರ ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ 1500 ವರ್ಷ ಹಳೆಯ ಇತಿಹಾಸ ಪ್ರಸಿದ್ಧ ದೇವಸ್ಥಾನದ ಅಸ್ತಿಯನ್ನು ವಕ್ಫ್ ಎಂದು ಆರ್ ಟಿ ಸಿ ಯಲ್ಲಿ ದಾಖಲಿಸಿದೆ. ಸಚಿವ ಎಮ್ ಬಿ ಪಾಟೀಲ್ ಅವರ ಕ್ಷೇತ್ರದ ಇಡೀ ಗ್ರಾಮವೇ ವಾಕ್ಫ್ ಎಂದು ದಾಖಲಾಗಿದೆ. ದ.ಕ ಜಿಲ್ಲೆಯಲ್ಲಿ ಕೂಡ ವಾಕ್ಫ್ ಬಂದ ಮಾಹಿತಿ ಲಭ್ಯವಾಗಿದೆ. ಇನ್ನಾದರೂ ಜನ ಎಚ್ಚೇತುಕೊಳ್ಳಬೇಕು ಎಂದರು.
ಇನ್ನು ಈ ವಿಚಾರದ ಕುರಿತಂತೆ ಮಾಹಿತಿ ಎಲ್ಲೆಡೆಯಿಂದ ಕಲೆ ಹಾಕುತ್ತಿದ್ದು ಮುಂದಿನ ದಿನಗಳಳ್ಳಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು
ಪತ್ರಿಕಾ ಗೋಷ್ಟಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ, ಪ್ರಶಾಂತ್ ಪಾರೆಂಕಿ ಉಪಸ್ಥಿತರಿದ್ದರು.