Saturday, June 28, 2025
Homeಕರಾವಳಿಬಿರುಗಾಳಿಯಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ಪರಿಹಾರ ವಿತರಣೆ

ಬಿರುಗಾಳಿಯಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ಪರಿಹಾರ ವಿತರಣೆ

spot_img
- Advertisement -
- Advertisement -

ಬಂಟ್ವಾಳ : ಇತ್ತೀಚೆಗೆ ಬಿರುಗಾಳಿಯಿಂದಾಗಿ ಹಾನಿಗೀಡಾದ ಬಡಗಕಜೆಕಾರ್, ತೆಂಕಕಜೆಕಾರ್, ಕಾವಳಮೂಡೂರು, ಉಳಿ, ಪಿಲಾತಬೆಟ್ಟು,ಇರ್ವತ್ತೂರು, ಸಂಗಬೆಟ್ಟು, ರಾಯಿ ಹಾಗೂ ಬಂಟ್ವಾಳ ಮತ್ತು ಪಾಣೆಮಂಗಳೂರು ಹೋಬಳಿಗಳ ಗ್ರಾಮಗಳ 110 ಜನ ಸಂತೃಸ್ತರಿಗೆ ಪ್ರಾಕೃತಿಕ ವಿಕೋಪದ ಪರಿಹಾರ ನಿಧಿಯ ರೂ.5,93,466 ಮೊತ್ತದ ಚೆಕ್‌ನ್ನು ವಿತರಿಸಲಾಯಿತು.

ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಅವರು ತಮ್ಮ ಕಚೇರಿಯಲ್ಲಿ ಚೆಕ್ ವಿತರಿಸಿದ್ರು, ಈ ಸಂಧರ್ಭದಲ್ಲಿ ಸಂಗಬೆಟ್ಟು ಅಧ್ಯಕ್ಷರಾದ ಸತೀಶ್ ಪೂಜಾರಿ, ರಾಯಿ ಪಂ. ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ರಾಯಿ, ಪಿಲಾತಬೆಟ್ಟು ಅಧ್ಯಕ್ಷರಾದ ಹರ್ಷಿಣಿ ಪುಷ್ಪಾನಂದ, ಉಳಿ ಗ್ರಾ. ಪಂ.ಅಧ್ಯಕ್ಷರಾದ ಸುರೇಶ್ ಮೈರ, ಕಾವಳಮೂಡೂರು ಗ್ರಾ. ಪಂ.ಉಪಾಧ್ಯಕ್ಷರಾದ ಅಜಿತ್ ಶೆಟ್ಟಿ, ಇರ್ವತ್ತೂರು ಗ್ರಾ. ಪಂ.ಸದಸ್ಯ ಶುಭಕರ, ಗ್ರಾ. ಪಂ.ಸದಸ್ಯರಾದ ಶೇಷಗಿರಿ ಪೂಜಾರಿ, ಬಡಗಕಜೆಕಾರು ಗ್ರಾ. ಪಂ.ಸದಸ್ಯರಾದ ಸತೀಶ್, ಕಂದಾಯ ವೃತ್ತನಿರೀಕ್ಷಕರಾದ ಸಂತೋಷ್, ವಿಜಯ್, ಗ್ರಾಮಕರಣೀಕರಾದ ವಂದನಾ, ನಿಶ್ಮಿತಾ, ಚೆನ್ನಬಸವ, ಆಶಾ, ಸ್ವಾತಿ, ಪ್ರವೀಣ್ ಉಪಸ್ಥಿತರಿದ್ದರು .

- Advertisement -
spot_img

Latest News

error: Content is protected !!