- Advertisement -
- Advertisement -
ಸುಳ್ಯ: ವಾಹನ ಡಿಕ್ಕಿ ಹೊಡೆದು ಚಿರತೆ ಮರಿಯೊಂದು ಸಾವನ್ನಪ್ಪಿರುವ ಘಟನೆ ನಾರ್ಕೋಡು ಕೋಲ್ಚಾರು ರಸ್ತೆ ಮಧ್ಯೆ ಏಣಾವರ ಎಂಬಲ್ಲಿ ನಡೆದಿದೆ.
ರಾತ್ರಿ ವೇಳೆ ಈ ರಸ್ತೆಯಲ್ಲಿ ಚಿರತೆ ಸಂಚಾರ ಹೆಚ್ಚಾಗಿ ಕಂಡು ಬರುತ್ತಿದೆ ಎನ್ನಲಾಗಿದ್ದು, ಈ ರಸ್ತೆಯು ಕೇರಳ ಬಂದಡ್ಕ ಕಡೆಗೆ ಸಂಪರ್ಕಿಸುವ ಕಾರಣದಿಂದ ರಾತ್ರಿ ವೇಳೆ ವಾಹನ ಸಂಚಾರ ಅಧಿಕವಾಗಿರುತ್ತದೆ. ಇದರಿಂದಾಗಿ ಚಿರತೆ ಮರಿ ರಸ್ತೆ ದಾಟುವ ಸಂದರ್ಭ ವಾಹನದಡಿ ಸಿಲುಕಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
- Advertisement -