- Advertisement -
- Advertisement -
ಪುತ್ತೂರು , ಪಾಣಾಜೆ ರಸ್ತೆಯ ಚೆಲ್ಯಡ್ಕ – ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಐವರು ಪ್ರಯಾಣಿಸುತ್ತಿದ್ದ ಕಾರೊಂದು ಉರುಳಿ ಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ .
ಉಪ್ಪಳಿಗೆಯ ಚೆಲ್ಯಡ್ಕ ತಿರುವಿನ ಬಳಿ ಚಾಲಕನ ಹತೋಟಿ ಕಳಕೊಂಡು ಅವಘಡ ಸಂಭವಿಸಿದೆ. ಬೆಟ್ಟಂಪಾಡಿ ಸಮೀಪ ಡೆಮ್ಮಂಗಾರದಿಂದ ಪುತ್ತೂರು ಕಡೆಗೆ ಹೊರಟಿದ್ದ ಆಕ್ಟೋ -800 ಕಾರು ಉಪ್ಪಳಿಗೆ ಸಮೀಪದ ಚೆಲ್ಯಡ್ಕ ಎಂಬಲ್ಲಿ ರಸ್ತೆಯ ಬದಿಯ ತೋಟಕ್ಕೆ ಉರುಳಿ ಬಿದ್ದಿದೆ .
ಅಪಾಯಕಾರಿ ಸ್ಥಿತಿಯಲ್ಲಿ ಕಾರು ಉರುಳಿ ಬಿದ್ದಿದ್ದರು ಅದೃಷ್ಟವಶಾತ್ ಐವರು ಯಾವುದೇ ಪ್ರಾಣಾಪಾಯಗಳಿಲ್ಲದ್ದೆ ಪಾರಾಗಿದ್ದಾರೆ. ಕಾರಿನಲ್ಲಿ ಮಗು ಸಹಿತ ಐವರು ಪ್ರಯಾಣಿಸುತ್ತಿದ್ದರು.ಯಾವುದೇ ಹಾನಿ ಸಂಭವಿಸದೆ ಎಲ್ಲರು ಸುರಕ್ಷಿತವಾಗಿ ಮೇಲೆ ಬಂದಿದ್ದಾರೆ.
- Advertisement -