Thursday, June 26, 2025
Homeಕರಾವಳಿಮಂಗಳೂರುಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಮೇ 30(ನಾಳೆ)ರಿಂದ ಭಕ್ತರಿಗೆ ಉಪಹಾರ ಯೋಜನೆ ಆರಂಭ

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಮೇ 30(ನಾಳೆ)ರಿಂದ ಭಕ್ತರಿಗೆ ಉಪಹಾರ ಯೋಜನೆ ಆರಂಭ

spot_img
- Advertisement -
- Advertisement -

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಮೇ 30(ನಾಳೆ)ರಿಂದ ಭಕ್ತರಿಗೆ ಉಪಹಾರ ಯೋಜನೆ ಆರಂಭವಾಗಲಿದೆ. ನಾಳೆ ಬೆಳಗ್ಗೆ 8 ಗಂಟೆಗೆ ಉಚಿತ ಬೆಳಗಿನ ಉಪಹಾರ ಯೋಜನೆ ಅಧಿಕೃತವಾಗಿ ಆರಂಭವಾಗಲಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ದೇವಸ್ಥಾನದ ಸಮಿತಿ ಅಧ್ಯಕ್ಷರು “ಪ್ರತಿ ದಿನ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಉಪಹಾರವನ್ನು ನೀಡಲಾಗುವುದು. ಇದು ದೇವರ ಪ್ರಸಾದದ ರೂಪದಲ್ಲಿ ಲಭ್ಯವಾಗುತ್ತದೆ” ಎಂದು ಹೇಳಿದರು.

ಉಪ್ಪಿಟ್ಟು, ಅವಲಕ್ಕಿ, ಹೆಸರುಕಾಳು, ಪುಳಿಯೋಗರೆ, ಪೊಂಗಲ್‌ ಮುಂತಾದ ಆಹಾರ ಉಪಹಾರದಲ್ಲಿ ಇರಲಿದೆ. ಪ್ರತಿದಿನ ಒಂದೊಂದು ಬಗೆಯ ಉಪಹಾರ ಸಿಗಲಿದ್ದು, ಇದು ಷಣ್ಮುಖ ಭೋಜನ ಶಾಲೆಯಲ್ಲಿ ಲಭ್ಯವಿರುತ್ತದೆ. ಉದ್ಘಾಟನಾ ದಿನವಾದ ಮೇ30 ರಂದು ನಡೆಯುವ ವಿಶೇಷ ಸಮಾರಂಭಕ್ಕೆ ಎಲ್ಲ ಭಕ್ತರಿಗೂ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದ್ರು.

- Advertisement -
spot_img

Latest News

error: Content is protected !!