- Advertisement -
- Advertisement -
ಕಡಬ : ಇಲ್ಲಿನ ದೋಳ್ವಾಡಿ ಬಳಿ ಶಾಲೆ ಮುಗಿಸಿ ಮನೆಗೆ ಬಂದ ಬಾಲಕನೊಬ್ಬ ಪೇರಳೆ ಹಣ್ಣು ತೆಗೆಯಲು ಮರ ಹತ್ತಲು ಹೋಗಿ ಸಾವನ್ನಪ್ಪಿದ ಘಟನೆ ನಡೆದಿದೆ .
ಎಡಮಂಗಲ ಸಮೀಪದ ದೋಳ್ವಾಡಿ ಮರಕ್ಕಡ ಮನೆಯ ದಿವಾಕರ ಗೌಡರವರ ಎಂಬವರ ಪುತ್ರ ಉಲ್ಲಾಸ್ ಡಿ.ಎಂ ( 8 ) ಮೃತ ಬಾಲಕ . ಈತ ಪೇರಳೆ ಹಣ್ಣು ಕೊಯ್ಯಲು ಮರಕ್ಕೆ ಹತ್ತಿದ್ದ ಈ ವೇಳೆ ಅಯತಪ್ಪಿ ಕೆಳಕ್ಕೆ ಉರುಳಿದಾಗ ತಲೆ ಭಾಗಕ್ಕೆ ಜೋರಾದ ಗಾಯವಾಗಿ ಮೃತಪಟ್ಟಿದ್ದಾನೆ .
ಈತ ದೋಳ್ವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಯಾಗಿದ್ದ. ಮೃತ ಉಲ್ಲಾಸ್ ತಂದೆ ದಿವಾಕರ್ , ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ .
- Advertisement -