ಬೆಳ್ತಂಗಡಿ : ವಿದ್ಯಾರ್ಥಿ ತಪ್ಪು ಮಾಡಿದ್ದಾನೆ ಎಂದು ಮೂರು ದಿನ ಶಾಲಾ ಶಿಕ್ಷಕ ಬೆತ್ತದಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ. ಸದ್ಯ ವಿದ್ಯಾರ್ಥಿ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ನಿವಾಸಿ 15 ವರ್ಷದ 9 ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿಗೆ ಸೆ.9,10,11 ರಂದು ಮೂರು ದಿನ ಸರಕಾರಿ ಪ್ರೌಢ ಶಾಲೆ ಪದ್ಮುಂಜ ಇಲ್ಲಿಯ ಇಂಗ್ಲಿಷ್ ಶಿಕ್ಷಕ ಅನಂತ್ ಕುಮಾರ್ ಎಂಬಾತ ಬೆತ್ತದಿಂದ ಹಲ್ಲೆ ಮಾಡಿದ್ದಾರೆ ಈ ವಿಚಾರವನ್ನು ವಿದ್ಯಾರ್ಥಿ ಯಾರಿಗೂ ಹೇಳದೆ ಸುಮ್ಮನಿದ್ದ ಬಳಿಕ ನೋವು ಜಾಸ್ತಿಯಾದ ಕಾರಣ ಮನೆಯವರಿಗೆ ವಿಚಾರ ತಿಳಿಸಿದ್ದು ಘಟನೆ ಬಗ್ಗೆ ಮಾಹಿತಿ ಕೇಳಿದಾಗ ಶಿಕ್ಷಕ ಹಲ್ಲೆ ಮಾಡಿದ ವಿಚಾರ ಬೆಳಕಿಗೆ ಬಂದಿದೆ.ತಕ್ಷಣ ಸೆ.12 ರಂದು ಸಂಜೆ ವಿದ್ಯಾರ್ಥಿಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿದ್ಯಾರ್ಥಿಯ ಬಲ ಕೈಗೆ ಹಾಗೂ ಎಡ ಕಾಲಿಗೆ ಬೆತ್ತದಿಂದ ಹಲ್ಲೆ ಮಾಡಿದ ಗಾಯವಾಗಿದ್ದು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಸೆ.12 ರಂದು ವಿದ್ಯಾರ್ಥಿನಿಯನ್ನು ಮನೆಯವರು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು. ಸರಕಾರಿ ಪ್ರೌಢ ಶಾಲೆ ಪದ್ಮುಂಜ ಮುಖ್ಯೋಪಾಧ್ಯಾಯರಾದ ಸುಮತಿ ಮತ್ತು ಕನ್ನಡ ಶಿಕ್ಷಕಿ ಸೌಮ್ಯ ಇವರ ಕುಮ್ಮಕಿನಿಂದ ಇಂಗ್ಲಿಷ್ ಶಿಕ್ಷಕ ಅನಂತ್ ಕುಮಾರ್ ಬೆತ್ತದಿಂದ ಹಲ್ಲೆ ಮಾಡಿರುವುದಾಗಿ ವಿದ್ಯಾರ್ಥಿ ತಂದೆ ಆರೋಪಿಸಿದ್ದಾರೆ.ಉಪ್ಪಿನಂಗಡಿ ಪೊಲೀಸರು ಸೆ.13 ರಂದು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿ ಬಳಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ.