ಬೆಳ್ತಂಗಡಿ : ಚೆಕ್ ಅಮಾನ್ಯ ಪ್ರಕರಣದಲ್ಲಿ ಬೆಳ್ತಂಗಡಿ ಕೋರ್ಟ್ ಗೆ ಒಂದು ವರ್ಷದಿಂದ ಹಾಜರಾಗದೆ ತಲೆಮರೆಸಿಕೊಂಡಿದ್ದ ಉತ್ತರ ಪ್ರದೇಶದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಉತ್ತರ ಪ್ರದೇಶದ ಪೊಲೀಸರ ಸಹಾಯದಂದ ಬಂಧಿಸಿ ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಿದ್ದು ನ್ಯಾಯಾಲಯ ಹದಿನಾಲ್ಕು ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಳ್ತಂಗಡಿ ತಾಲೂಕಿನ ನಿವಾಸಿಯೊಬ್ಬರ ವ್ಯವಹಾರ ಸಂಬಂಧ ಒಂದು ಕೋಟಿ ಹತ್ತು ಲಕ್ಷ ಮೊತ್ತಕ್ಕೆ ನೀಡಿದ ಚೆಕ್ ಬ್ಯಾಂಕ್ ನಲ್ಲಿ ನೀಡಿದಾಗ ಬೌನ್ಸ್ ಅಗಿದ್ದು ನಂತರ ಇದನ್ನು ಬೆಳ್ತಂಗಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಆರೋಪಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಗರದ ನಿವಾಸಿ ದೀಪಕ್ ಮೌರ್ಯ(33) ಒಂದು ವರ್ಷಗಳಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನ್ನು, ಈ ಬಗ್ಗೆ ನ್ಯಾಯಾಲಯ ವಾರೆಂಟ್ ಜಾರಿ ಮಾಡಿ ಬಂಧಿಸಲು ಆದೇಶ ಹೊರಡಿಸಿತ್ತು. ಬೆಳ್ತಂಗಡಿ ಪೊಲೀಸರು ಹಲವು ಬಾರಿ ಆರೋಪಿಯ ಬಂಧನಕ್ಕೆ ಹೋದಾಗ ತಪ್ಪಿಸಿಕೊಳ್ಳುತ್ತಿದ್ದ. ಆದರೆ ಈ ಬಾರಿ ಮಾತ್ರ ಪೊಲೀಸರ ಕೈಗೆ ಸಿಕ್ಕಿಬಿದ್ದು ಆರೋಪಿ ಲಾಕ್ ಅಗಿ ಜೈಲು ಪಾಲಾಗಿದ್ದಾನೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ಮತ್ತು ಸಬ್ ಇನ್ಸ್ಪೆಕ್ಟರ್ ಅರ್ಜುನ್ ಅವರ ಆದೇಶದ ಮೇರೆಗೆ ವಿಶೇಷ ಕರ್ತವ್ಯದಲ್ಲಿ ಎಎಸ್ಐ ರಾಮಯ್ಯ ಹೆಗ್ಡೆ ಮತ್ತು ಹೆಡ್ ಕಾನ್ಟೇಬಲ್ ಗಂಗಾಧರ್ ಪೂಜಾರಿಯವರು ಮಂಗಳೂರು ವಿಮಾನದ ಮೂಲಕ ದೆಹಲಿ ಮೂಲಕ ಉತ್ತರ ಪ್ರದೇಶಕ್ಕೆ ತೆರಳಿ ಅಲ್ಲಿಂದ ಪ್ರಯಾಗ್ ರಾಜ್ ನಗರದ ಪೊಲೀಸ್ ಠಾಣೆಗೆ ಹೋಗಿ ಹಿರಿಯ ಪೊಲೀಸರ ಬಳಿ ಆರೋಪಿಯ ದಸ್ತಗಿರಿ ಮಾಡುವ ವಾರೆಂಟ್ ಬಗ್ಗೆ ಮಾಹಿತಿ ನೀಡಿ ನಂತರ ಅವರದ್ದೇ ಪೊಲೀಸ್ ವಾಹನದಲ್ಲಿ ಶಸ್ತ್ರಾಸ್ತ್ರ ಜೊತೆ ಆರೋಪಿ ಮನೆಗೆ ದಾಳಿ ಮಾಡಿ ಆರೋಪಿ ದೀಪಕ್ ಮೌರ್ಯ ನನ್ನು ವಶಕ್ಕೆ ಪಡೆದು ಭದ್ರತೆಯಲ್ಲಿ ಉತ್ತರ ಪ್ರದೇಶ ವಿಮಾನ ನಿಲ್ದಾಣದವರಿಗೆ ಪ್ರಯಾಗ್ ರಾಜ್ ನಗರ ಪೊಲೀಸರು ತಲುಪಿಸಿ ಅಲ್ಲಿಂದ ದೆಹಲಿ ಬಂದು ನಂತರ ಮಂಗಳೂರು ವಿಮಾನ ಮೂಲಕ ಬಂದು ಅಲ್ಲಿಂದ ಬೆಳ್ತಂಗಡಿ ಕರೆ ತಂದು ಕೋರ್ಟ್ ಗೆ ಆರೋಪಿಯನ್ನು ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗೆ ಹದಿನಾಲ್ಕು ದಿನ ನ್ಯಾಯಾಂಗ ಬಂಧನ ವಿಧಿಸಿದೆ.