- Advertisement -
- Advertisement -
ಬಂಟ್ವಾಳ: ನೇತ್ರಾವತಿ ನದಿಗೆ ಬಟ್ಟೆ ತೊಳೆಯಲು ಹೋದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆ ಬರಿಮಾರು ಗ್ರಾಮದ ಬುರ್ದುನಲ್ಲಿ ನಡೆದಿದೆ. ಬುರ್ದು ನಿವಾಸಿ ರಾಮಕ್ಕು(60) ಮೃತ ಮಹಿಳೆ.
ಅವರು ಬುಧವಾರ ಸಂಜೆ ಬಟ್ಟೆ ತೊಳೆಯುವುದಕ್ಕಾಗಿ ನದಿಗೆ ತೆರಳಿದ್ದಾರೆ. ಆ ವೇಳೆ ಆಳವಾಗಿರುವ ಜಾಗದಲ್ಲಿ ನೀರಿಗೆ ಬಿದ್ದಿದ್ದಾರೆ. ಪರಿಣಾಮ ಸಾವನ್ನಪ್ಪಿದ್ದಾರೆ. ಮೃತ ಮಹಿಳೆ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -