Sunday, May 19, 2024
Homeಅಪರಾಧಧರ್ಮಸ್ಥಳ: ಅರಣ್ಯ ಸಂಚಾರಿದಳದ ಮಿಂಚಿನ ಕಾರ್ಯಾಚರಣೆ, ಜಿಂಕೆ ಚರ್ಮ ವಶಕ್ಕೆ

ಧರ್ಮಸ್ಥಳ: ಅರಣ್ಯ ಸಂಚಾರಿದಳದ ಮಿಂಚಿನ ಕಾರ್ಯಾಚರಣೆ, ಜಿಂಕೆ ಚರ್ಮ ವಶಕ್ಕೆ

spot_img
- Advertisement -
- Advertisement -

ಬೆಳ್ತಂಗಡಿ: ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಜಿಂಕೆ ಚರ್ಮವನ್ನು‌ ಬೆಳಗಾವಿಯಿಂದ ಬಸ್ ಮೂಲಕ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಗುಮಾನಿ ಮೇರೆಗೆ ಪುತ್ತೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್ಐ ಶ್ರೀಮತಿ ಜಾನಕಿ ನೇತ್ರತ್ವದಲ್ಲಿ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.

ಬೆಳಗಾವಿಯ ಹನುಮಂತ(35) ಬಂಧಿತ ಆರೋಪಿ. ಆತನಿಂದ ಒಂದು ಮೊಬೈಲ್ ಫೋನ್,ಜಿಂಕೆ ಚರ್ಮವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಬೆಳ್ತಂಗಡಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಾರ್ಯಾಚಣೆಯಲ್ಲಿ ಪುತ್ತೂರು ವಿಶೇಷ ಅರಣ್ಯ ಸಂಚಾರಿ ಪೊಲೀಸರಾದ ಪಿಎಸ್ಐ ಶ್ರೀಮತಿ ಜಾನಕಿ ಮತ್ತು ಸಿಬ್ಬಂದಿಗಳಾದ ಸುಂದರ್ ಶೆಟ್ಟಿ, ವಿಜಯ ಸುವರ್ಣ, ಉದಯ್, ಸಂತೋಷ್ ಭಾಗವಹಿಸಿದ್ದರು.

- Advertisement -
spot_img

Latest News

error: Content is protected !!