- Advertisement -
- Advertisement -
ಬೆಳ್ತಂಗಡಿ; ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಆರಿಕೊಡಿ ಇದರ ಧರ್ಮದಶಿಗಳಾದ ಶ್ರೀ ಹರೀಶ್ ಅವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ, ನಮ್ಮ ಕಳೆoಜ ನಂದಗೋಕುಲ ಗೋಶಾಲೆಗೆ ಪತ್ನಿ ಸಮೇತ ಆಗಮಿಸಿ, ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು .
ತಮ್ಮ ಹುಟ್ಟುಹಬ್ಬದ ಪ್ರಯುಕ್ತ, ಗೋಶಾಲೆಯ ಗೊಗ್ರಾಸಕ್ಕಾಗಿ 25,000 /- ನಗದು ನೀಡಿದರು. ಗೋಶಾಲೆಗೆ ಸದಾಕಾಲ ಸಹಕರಿಸುವುದಾಗಿ ತಿಳಿಸುತ್ತಾ, ಕಾರ್ಯಕ್ರಮ ಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರನ್ನು ಈ ವೇಳೆ ಗೋಶಾಲೆಯ ಪರವಾಗಿ ಅಭಿನoದಿಸಲಾಯಿತು. ಸಂದರ್ಭದಲ್ಲಿ ನಂದಗೋಕುಲ ಗೋಶಾಲೆಯ ಅಧ್ಯಕ್ಷರಾದ ಡಾ. ದಯಾಕರ, ಅರಿಕೊಡಿ ಚಾಮುಂಡೇಶ್ವರಿ ದೇವಸ್ಥಾನದ ಸಿಬ್ಬಂದಿ ಮತ್ತು ನಂದಗೋಕುಲ ಗೋಶಾಲೆ ಸಿಬ್ಬಂದಿ ಉಪಸ್ಥಿತರಿದ್ದರು.
- Advertisement -