ಮಂಗಳೂರು: ಕಳೆದ ಭಾನುವಾರ ದೈಜಿವರ್ಲ್ಡ್ ವಾಹಿನಿಯಲ್ಲಿ ಪ್ರಸಾರಗೊಂಡ ‘ಪ್ರೈವೇಟ್ ಚಾಲೆಂಜ್’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಜ್ಯೋತಿಷ್ಯ ಶಾಸ್ತ್ರ ಮತ್ತು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಕಾರ್ಯಕ್ರಮ ನಡೆಸಿಕೊಡುವ ವಾಹಿನಿಯ ಮುಖ್ಯಸ್ಥ ವಾಲ್ಟರ್ ನಂದಳಿಕೆ ಮತ್ತು ಕಾರ್ಯಕ್ರಮದ ಕೇಂದ್ರ ಬಿಂದುವಾಗಿರುವ ಹಾಸ್ಯ ನಟ ಅರವಿಂದ್ ಬೋಳಾರ್ ವಿರುದ್ಧ ನಗರದ ಕಾವೂರ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.

ಈ ಕುರಿತು ವಾಲ್ಟರ್ ನಂದಳಿಕೆ ತಮ್ಮ ವೈಯಕ್ತಿಕ ಫೇಸ್ಬುಕ್ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ವಿಡಿಯೋವೊಂದನ್ನು ಹಾಕಿದ್ದು, ಈ ಮೂಲಕ ಈ ಕಾರ್ಯಕ್ರಮ ಕೇವಲ ಹಾಸ್ಯದ ದೃಷ್ಟಿಯಿಂದ ಮಾಡಿದ್ದೆ, ವಿನಃ ಯಾವುದೇ ಧರ್ಮದ ಅಥವಾ ನಂಬಿಕೆಯನ್ನು ಅವಹೇಳನ ಮಾಡುವ ದೃಷ್ಟಿಯಿಂದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಹಾಗೆಯೆ ತಮ್ಮ ಹಾಸ್ಯದಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇವೆ. ಹಾಗು ಈ ಭಾರಿ ಜನಮ್ಮನೇ ಪಡೆದಿರುವ ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿಯೂ ವಿನೂತನ ವಿಷಯಗಳೊಂದಿಗೆ ಜನರ ಮುಂದೆ ಬರುತ್ತೇವೆ ಎಂದು ವಾಲ್ಟರ್ ನಂದಳಿಕೆ ಮತ್ತು ಅರವಿಂದ್ ಬೋಳಾರ್ ಹೇಳಿದ್ದಾರೆ.