- Advertisement -
- Advertisement -
ಸುಳ್ಯ; ಮಸೂದ್ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರು ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಪ್ರವೀಣ್ ನನ್ನು ಹತ್ಯೆ ಮಾಡಲಾಗಿದೆ. ಆದರೆ, ಮಸೂದ್ ಕೊಲೆ ವೈಯುಕ್ತಿಕ ಕಾರಣಗಳಿಂದಾಗಿ ಆಗಿದೆ. ನಾವು ತಾರತಮ್ಯ ಮಾಡಿಲ್ಲ. ಪ್ರವೀಣ್ ನೆಟ್ಟಾರು ಕೊಲೆಯಾಗಿದೆ. ಮಸೂದ್ ವಿಚಾರದಲ್ಲಿ ಗಾಂಜಾದ ಪ್ರಕರಣ ಇದೆ. ಅಲ್ಲಿ ವೈಯಕ್ತಿಕ ಕಾರಣಕ್ಕೆ ಕೊಲೆ ಮಾಡಲಾಗಿದೆ. ಅದು ಈ ರೀತಿಯ ಮರ್ಡರ್ ಅಲ್ಲ ಎಂದು ಹೇಳಿ ಸಚಿವರು ಗೊಂದಲ ಸೃಷ್ಟಿಸಿದ್ದಾರೆ.
ನಮಗೆ ಮುಸ್ಲಿಂ, ಕ್ರಿಶ್ಚಿಯನ್ ಹಿಂದೂ ಭೇದ ಭಾವ ಇಲ್ಲ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರ ಬಂಧನವಾಗಿದೆ. ಮತ್ತಿಬ್ಬರನ್ನು ಪತ್ತೆ ಹಚ್ಚುವ ಕೆಲಸ ಇಲಾಖೆ ಮಾಡುತ್ತಿದೆ ಎಂದು ಇದೇ ವೇಳೆ ಅಂಗಾರ ಅವರು ಹೇಳಿದ್ದಾರೆ.
- Advertisement -