- Advertisement -
- Advertisement -
ಹಾಸನ; ಸಕಲೇಶಪುರದ ಆಚಂಗಿ ಸಮೀಪ ಮತ್ತೆ ಭೂಕುಸಿತವಾಗಿದ್ದು ಮಂಗಳೂರು- ಬೆಂಗಳೂರು ನಡುವಿನ ರೈಲು ಸಂಚಾರ ಸ್ಥಗಿತವಾಗಿದೆ.
ಕಳೆದ ವಾರ ಕೂಡ ಇಲ್ಲೇ ಭೂಕುಸಿತವಾಗಿತ್ತು. ಪರಿಣಾಮ ರೈಲು ಸಂಚಾರ ಸ್ಥಗಿತವಾಗಿತ್ತು. ಕಳೆದ 2 ದಿನಗಳ ಹಿಂದೆ ರೈಲು ಸಂಚಾರ ಪುನರ್ ಆರಂಭಗೊಂಡಿತ್ತು.
ಶುಕ್ರವಾರ ಬೆಳಿಗ್ಗೆ ಮತ್ತೆ ಹಳಿಗಳ ಮೇಲೆ ಭೂ ಕುಸಿತ ಉಂಟಾಗಿದೆ. ಇದರಿಂದಾಗಿ ರೈಲು ಸಂಚಾರ ರದ್ದಾಗಿದ್ದು ಬೆಂಗಳೂರು – ಕಾರವಾರ ನಡುವಿನ ರೈಲು ಬಾಳ್ಳುಪೇಟೆ ಬಳಿ ನಿಂತಿದ್ದರಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಬಳಿಕ ರೈಲು ಸಂಚಾರ ಪುನರಾರಂಭಗೊಳ್ಳಲಿದೆ ಎನ್ನಲಾಗಿದೆ.
- Advertisement -