- Advertisement -
- Advertisement -
ಮಂಗಳೂರು: ಕೊರಗಜ್ಜನ ಆದಿಸ್ಥಳ ಕುತ್ತಾರಿಗೆ ಚಲನಚಿತ್ರ ನಟ ಶಿವರಾಜ್ ಕುಮಾರ್ ಇಂದು ಕುಟುಂಬ ಸಮೇತ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ
ಪತ್ನಿ ಗೀತಾ ಹಾಗೂ ಪುತ್ರಿಯೊಂದಿಗೆ ಕುತ್ತಾರು ಕ್ಷೇತ್ರಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್, ಕೊರಗಜ್ಜನಿಗೆ ವೀಳ್ಯದೆಲೆ ಮತ್ತು ಚಕ್ಕುಲಿ ಸಮರ್ಪಿಸಿದರು.
ಶಿವರಾಜ್ ಕುಮಾರ್ ಅವರ ಜೊತೆ ವೇದ ಚಿತ್ರ ತಂಡ ಕೂಡಾ ಕುತ್ತಾರಿಗೆ ಭೇಟಿ ನೀಡಿತ್ತು. ವೇದ ಚಲನಚಿತ್ರದ ಪ್ರಮೋಷನ್ ಗಾಗಿ ಮಂಗಳೂರಿಗೆ ಶಿವರಾಜ್ ಕುಮಾರ್ ಆಗಮಿಸಿದ್ದು, ಸಂಜೆ ಪಣಂಬೂರು ಕಡಲ ತೀರದಲ್ಲಿ ವೇದ ಚಿತ್ರದ ಪ್ರಮೋಶನ್ ಕಾರ್ಯಕ್ರಮ ನಡೆಯಲಿದೆ.
- Advertisement -