Friday, June 27, 2025
Homeಕರಾವಳಿಮಂಗಳೂರುಬೆಳ್ತಂಗಡಿ : ಸರಕಾರಿ ಬಸ್ ಮತ್ತು ಜೀಪು ನಡುವೆ ಅಪಘಾತ; ಜೀಪು ಚಾಲಕನಿಗೆ ಗಂಭೀರ ಗಾಯ

ಬೆಳ್ತಂಗಡಿ : ಸರಕಾರಿ ಬಸ್ ಮತ್ತು ಜೀಪು ನಡುವೆ ಅಪಘಾತ; ಜೀಪು ಚಾಲಕನಿಗೆ ಗಂಭೀರ ಗಾಯ

spot_img
- Advertisement -
- Advertisement -

ಬೆಳ್ತಂಗಡಿ : ಸರಕಾರಿ ಬಸ್ ಮತ್ತು ಜೀಪು ನಡುವೆ ಅಪಘಾತದಿಂದ ಜೀಪು ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ‌.

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಬಸಮೆ ಎಂಬಲ್ಲಿ ಬೆಳ್ತಂಗಡಿಯಿಂದ ಕೊಯ್ಯರು ಕಡೆಗೆ ಹೋಗುವ ಜೀಪು ಮತ್ತು ಕೊಯ್ಯೂರು ನಿಂದ ಬೆಳ್ತಂಗಡಿ ಕಡೆ ಬರುವ ಸರಕಾರಿ ಬಸ್‌ ಡಿಕ್ಕಿ ಹೊಡೆದ ಘಟನೆ ಮಾ.23ರಂದು ಭಾನುವಾರ ನಡೆದಿದೆ.

ಜೀಪು ಚಾಲಕ ಸಂಕಪ್ಪ ಪೂಜಾರಿ (ಅಣ್ಣು ಪೂಜಾರಿ) ರವರಿಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!