- Advertisement -
- Advertisement -
ವಿಟ್ಲ: ಅಕ್ರಮವಾಗಿ ಸಹೋದರಿಯೊಬ್ಬಳು ಸಹೋದರ ಭೂಮಿ ಕಬಳಿಸಿದ ಆರೋಪ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದಲ್ಲಿ ಕೇಳಿ ಬಂದಿದೆ.
ಪೆರಾಜೆ ಶಿವಪ್ಪ ಗೌಡ ಅವರ ಸಹೋದರಿ ಇಂದಿರಾ, ಸಂಬಂಧಿಕರಾದ ಸುಶೀಲ, ದರ್ಣಪ್ಪಗೌಡ, ಯಮುನಾ ಹಾಗೂ ಗಂಗಾಧರ ಅವರೊಂದಿಗೆ ಸೇರಿಕೊಂಡು, ಶಿವಪ್ಪ ಗೌಡ ಅವರ ಜಮೀನಿನಲ್ಲಿ ಬೆಳೆದ ಅಡಿಕೆಯನ್ನು ಮಾಣಿ ಕ್ಯಾಂಪ್ಕೋ ಸಂಸ್ಥೆಗೆ ಮಾರಾಟ ಮಾಡಿ, ಅವರ ಹೆಸರಿನಲ್ಲಿ ನಕಲಿ ಉಳಿತಾಯ ಖಾತೆ ತೆರೆದು, 2006ನೇ ಇಸವಿಯಿಂದ ಇಲ್ಲಿಯವರೆಗೆ ಸುಮಾರು 51,00,000/- ರೂ ಹಣವನ್ನು ಇಂದಿರಾ ಅವರ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಶಿವಪ್ಪ ಗೌಡ ಅವರ ತಾಯಿಯ ಹೆಸರಿನಲ್ಲಿರುವ 6.92 ಎಕ್ರೆ ಜಮೀನನ್ನು ತಾಯಿಯ ನಕಲಿ ಸಹಿ ಹಾಕಿಸಿಕೊಂಡು, ಇಂದಿರಾ ತಮ್ಮ ಹೆಸರಿಗೆ ವ್ಯವಸ್ಥೆ ಪತ್ರ ಮಾಡಿಕೊಂಡು, ಕೊಲೆ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- Advertisement -