- Advertisement -
- Advertisement -
ಬೆಳ್ತಂಗಡಿ ನಗರ ಪಂಚಾಯತ್ ಗಡಿಯಿಂದ ಬರುವಂತಹ ಗ್ರಾಮವನ್ನು ನಗರ ಪಂಚಾಯತ್ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ನಿರ್ಧಾರವನ್ನು 2020ರಲ್ಲಿ ಸರಕಾರವು ಕೈಗೊಂಡಿತ್ತು ಈ ಪಟ್ಟಿಯಲ್ಲಿ ನಮ್ಮ ಗ್ರಾಮವೂ ಬಂದಿರುತ್ತದೆ ಆದರೆ ನಮ್ಮ ಗ್ರಾಮವೂ ನಗರ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟರೆ ಸರಕಾರದಿಂದ ಸಿಗುವ ಸವಲತ್ತು (94c, ಅಕ್ರಮ ಸಕ್ರಮ) ಹಾಗೂ ಇನ್ನಿತರ ಸೌಲಭ್ಯಗಳಿಂದ ನಮ್ಮ ಗ್ರಾಮವೂ ವಂಚಿತವಾಗುತ್ತದೆ.
ಗ್ರಾಮವನ್ನು ನಗರ ಪಂಚಾಯತ್ ವ್ಯಾಪ್ತಿಗೆ ಸೇರಿಸದಂತೆ ಸರಕಾರಕ್ಕೆ ಒತ್ತಡ ತರಬೇಕಾಗಿ ಕೆಪಿಸಿಸಿಪಿ ಪ್ರಧಾನ ಕಾರ್ಯದರ್ಶಿಗಳಾದ ಮಾನ್ಯ ರಕ್ಷಿತ್ ಶಿವರಾಂ ಬಳಿ ಕೊಯ್ಯುರ್ ಗ್ರಾಮಸ್ಥರು ಮನವಿ ಸಲ್ಲಿಸಿದರು.ಹಾಗೂ ಇನ್ನಿತರ ಮೂಲಭೂತ ಸೌಕರ್ಯವನ್ನು ಒದಗಿಸಲು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಲೋಕೇಶ್ ಗೌಡ ಕೊಯ್ಯೂರು ಲತೀಫ್ ಉಣ್ಣಲು , ಪ್ರವೀಣ್ ಗೌಡ ಮಾವಿನಕಟ್ಟೆ, ಸಿದ್ದಿಕ್ MS ಮಲೆಬೆಟ್ಟು. ಸಲೀಂ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು
- Advertisement -