Sunday, June 29, 2025
Homeತಾಜಾ ಸುದ್ದಿತುಳುವರೇ ಮೋದಿಯನ್ನು ಮಂಗಳೂರಿಗೆ ಸ್ವಾಗತಿಸೋಣ: ದುರ್ಬಲ ಸಂಸದನನ್ನು ಬದಲಾಯಿಸಲು ಒತ್ತಾಯಿಸೋಣ: ಸೋಶಿಯಲ್‌ ಮೀಡಿಯಾದಲ್ಲಿ ಕಟೀಲ್‌ ವಿರುದ್ಧದ...

ತುಳುವರೇ ಮೋದಿಯನ್ನು ಮಂಗಳೂರಿಗೆ ಸ್ವಾಗತಿಸೋಣ: ದುರ್ಬಲ ಸಂಸದನನ್ನು ಬದಲಾಯಿಸಲು ಒತ್ತಾಯಿಸೋಣ: ಸೋಶಿಯಲ್‌ ಮೀಡಿಯಾದಲ್ಲಿ ಕಟೀಲ್‌ ವಿರುದ್ಧದ ಪೋಸ್ಟ್‌ ವೈರಲ್

spot_img
- Advertisement -
- Advertisement -

ಮಂಗಳೂರು: ಸೆಪ್ಟೆಂಬರ್‌ 2ರಂದು ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸಲಿದ್ದಾರೆ. ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಸಂಸದ ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧ ಅಭಿಯಾನವೊಂದು ಶುರುವಾಗಿದೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಮೋದಿಜಿಯವರನ್ನು ಅದ್ಧೂರಿಯಾಗಿ ಸ್ವಾಗತಿಸುವ ಮೊದಲು ನಮ್ಮ‌ ಜಿಲ್ಲೆಯ ಸಂಸದರ ಬದಲಾವಣೆಯ ಕೂಗು ಕೇಳಿ ಬರಲಿ ಎಂಬ ಪೋಸ್ಟ್‌ ಇದೀಗ ವೈರಲ್‌ ಆಗ್ತಿದೆ.

‘ನಮೋ ಕರುನಾಡು’ ಎಂಬ ಪೇಜ್ ‘ತುಳುವರೇ ಮೋದಿಜೀ ಮಂಗಳೂರಿಗೆ ಬರುತ್ತಿದ್ದಾರೆ. ವಿಶ್ವ ನಾಯಕನನ್ನು ಸ್ವಾಗತಿಸುದರೊಂದಿಗೆ ದುರ್ಬಲ ಸಂಸದ, ರಾಜ್ಯಾಧ್ಯಕ್ಷರನ್ನು ಬದಲಾಯಿಸಲು ಒತ್ತಾಯಿಸೋಣ ಎಂದು ಪೋಸ್ಟ್ ಮಾಡಿದೆ.

ಇಂತಹ ಪೋಸ್ಟ್ ಗಳಿಂದ ಮೋದಿಯವರ ಆಗಮನದ ವೇಳೆ ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ಕಾರ್ಯಕರ್ತರ ಆಕ್ರೋಶ ಸ್ಫೋಟಗೊಳ್ಳುವ ಸಾಧ್ಯತೆಯಿದೆ.

- Advertisement -
spot_img

Latest News

error: Content is protected !!