- Advertisement -
- Advertisement -
ಕಡಬ : ಮದ್ಯಸೇವಿಸಿ ಕುಮಾರಧಾರ ನದಿ ಬಳಿ ಹೋಗಿದ್ದ ವ್ಯಕ್ತಿ ಅಲ್ಲೇ ಸಾವನ್ನಪ್ಪಿರುವ ಘಟನೆ ಕಡಬ ತಾಲೂಕಿನ ಚಾರ್ವಾಕ ಗ್ರಾಮದಲ್ಲಿ ನಡೆದಿದೆ.ಸೋಮಶೇಖರ (40) ಮೃತರು.
ಅವಿವಾಹಿತರಾಗಿದ್ದ ಅವರು ಮದ್ಯ ಸೇವಿಸಿ ಹೊಳೆ ಬದಿಗೆ ಹೋದವರು ಸಂಜೆ ತನಕವೂ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸಹೋದರ ಹೊಳೆ ಬದಿಯಲ್ಲಿ ಹುಡುಕಿದಾಗ ಹೊಳೆಯ ಬದಿಯಲ್ಲಿನ ಕಲ್ಲಿನ ಮೇಲೆ ಮಲಗಿದ ಸ್ಥಿತಿಯಲ್ಲಿ ಕಂಡು ಪತ್ತೆಯಾಗಿದ್ದಾರೆ. ಅವರನ್ನು ಆ್ಯಂಬುಲೆನ್ಸ್ ನಲ್ಲಿ ಕಡಬ ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
- Advertisement -