Friday, June 27, 2025
Homeಅಪರಾಧಸಹಕಾರಿ ಬ್ಯಾಂಕ್ ಗಳಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚಿಸಿದ ಪ್ರಕರಣ; ಮೂವರು ಆರೋಪಿಗಳ ಬಂಧನ

ಸಹಕಾರಿ ಬ್ಯಾಂಕ್ ಗಳಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚಿಸಿದ ಪ್ರಕರಣ; ಮೂವರು ಆರೋಪಿಗಳ ಬಂಧನ

spot_img
- Advertisement -
- Advertisement -

ಸುರತ್ಕಲ್‌: ಕರ್ನಾಟಕ ಸಹಕಾರಿ ಬ್ಯಾಂಕ್ ನಲ್ಲಿ ಕಳ್ಳರ ತಂಡವೊಂದು ವನ್ ಗ್ರಾಂ ಚಿನ್ನವನ್ನು ಅಡಯಿಟ್ಟು 4.91 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿದ ಘಟನೆ ನಡೆದಿದ್ದು, ಇದೀಗ ಈ ಪ್ರಕರಣದ ಇಡೀ ಜಾಲವನ್ನು ಪೊಲೀಸರು ಭೇಧಿಸಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ತಮಿಳುನಾಡು ದಿಂಡಿಗಲ್ ಮೂಲದ ಪನ್ನೀರ್ ಸೆಲ್ವಂ(53), ಸುರತ್ಕಲ್ ಜನತಾ ಕಾಲೊನಿ ನಿವಾಸಿ ತಮಿಳುನಾಡು ಮೂಲದ ಮಹಮ್ಮದ್ ಮುಸ್ತಾಫಾ(34) ಹಾಗೂ ಜನತಾ ಕಾಲೊನಿ ನಿವಾಸಿ ಶಮೀಮಾ(32) ಎಂದು ತಿಳಿದು ಬಂದಿದೆ.

ಘಟನೆಯ ವಿವರ: ಈ ಪ್ರಕರಣವು ಹಲವು ವರ್ಷಗಳ ಹಿಂದೆಯೇ ನಡೆದಿದ್ದು ಸಹಕಾರ ಸಂಘಗಳು, ಖಾಸಗಿ ಹಣಕಾಸು ಸಂಸ್ಥೆಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಬೆಚ್ಚಿ ಬೀಳಿಸಿತ್ತು. ಪ್ರಸ್ತುತ ಈ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ. ಸಹಕಾರ ಸಂಘಗಳಲ್ಲಿ ಅಡವರಿಸಿದ ಚಿನ್ನ 6 ತಿಂಗಳಲ್ಲಿ ಮರುಪರಿಶೀಲನೆ ನಡೆಸಬೇಕು ಎಂಬ ನಿಯಮವಿದ್ದು ಸೊಸೈಟಿಯವರು ಬಳೆ ಕತ್ತರಿಸಿ ನಕಲಿ ಚಿನ್ನಾಭರಣ ಮರು ಪರಿಶೀಲನೆ ನಡೆಸಿದಾಗ ವಂಚನೆ ಬೆಳಕಿಗೆ ಬಂದಿರುತ್ತದೆ. ಇವರು ಬಳಸಿದ್ದು ವನ್ ಗ್ರಾಂ ಚಿನ್ನದ ಬಳೆಯಾಗಿದ್ದರೂ ಸಾಲ ನೀಡುವ ಮೊದಲು ಸರಾಫರ ಪರಿಶೀಲನೆಗೆ ಸಿಗಲಿಲ್ಲ ಎಂದು ತಿಳಿದು ಬಂದಿದೆ. ಇನ್ನು ಆರೋಪಿಗಳನ್ನು 2019ರ ಅ.28ರಂದು ಬಂಧಿಸಲಾಗಿತ್ತು. ಬಳಿಕ ಕೋವಿಡ್ ಇತ್ಯಾದಿ ಕಾರಣಕ್ಕೆ ಈ ಪ್ರಕರಣದ ತನಿಖೆಯಲ್ಲಿ ವಿಳಂಬವಾಗಿತ್ತು. 2019ರಲ್ಲಿ ಪ್ರಕರಣ ದಾಖಲಾಗಿದ್ದು ಅವರನ್ನು ಸುರತ್ಕಲ್ ಠಾಣೆಯ ಅಂದಿನ ಠಾಣಾಧಿಕಾರಿಗಳಾಗಿದ್ದ ಕೆ ಕೆ ರಾಮಕೃಷ್ಣ ಅವರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಆರೋಪಿಗಳು ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅವರ ವಿರುದ್ಧ ಸುರತ್ಕಲ್ ಠಾಣೆ ಎಸ್‌ಐ ಅರುಣ್ ಕುಮಾ‌ರ್ 2022ರ ಜು.22ರಂದು ಚಾರ್ಜ್ ಶೀಟ್ ಸಲ್ಲಿಸಿದ್ದರು.

- Advertisement -
spot_img

Latest News

error: Content is protected !!