Wednesday, May 22, 2024
Homeಇತರಬೆಳ್ತಂಗಡಿ: ಸ್ವ ಸಹಾಯ ಸಂಘಕ್ಕೆ ಹಣ ಕಟ್ಟಲು ಹೋದ ಬಾಲಕ ನಾಪತ್ತೆ...!

ಬೆಳ್ತಂಗಡಿ: ಸ್ವ ಸಹಾಯ ಸಂಘಕ್ಕೆ ಹಣ ಕಟ್ಟಲು ಹೋದ ಬಾಲಕ ನಾಪತ್ತೆ…!

spot_img
- Advertisement -
- Advertisement -

ಬೆಳ್ತಂಗಡಿ: ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮುಗಿಸಿ ತಂದೆಯೊಂದಿಗೆ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದ ಬಾಲಕ ನಾಪತ್ತೆಯಾದ ಘಟನೆ ಅ.27ರಂದು ವರದಿಯಾಗಿದೆ. ಲಾಯಿಲ ಗ್ರಾಮದ ಪಡ್ಲಾಡಿ ಮನೆ ನಿವಾಸಿ ಬಾಬು ಎಂಬವರ ಪುತ್ರ ಬಿಪಿನ್ (17 ) ನಾಪತ್ತೆಯಾದ ಬಾಲಕ.

ಅ. 19 ರಂದು ಬೆಳಿಗೆ ಸ್ವ ಸಹಾಯ ಸಂಘಕ್ಕೆ ಹಣ ಕಟ್ಟಲು ಹೋದ ಬಿಪಿನ್ ಸಂಜೆಯಾದರೂ ಮನೆಗೆ ವಾಪಾಸ್ಸು ಬಂದಿರಲಿಲ್ಲ. ಆ ಬಳಿಕ ಅ 21 ರಂದು ಆತನ ತಾಯಿಗೆ ಮೊಬೈಲ್ ಕರೆ ಮಾಡಿ ಮನೆಗೆ ವಾಪಾಸ್ಸು ಬರುವುದಾಗಿ ಹೇಳಿದನನ್ನಲಾಗಿದೆ. ಅ.25 ರಂದು ಆತ ಪುನಃ ತಾಯಿಗೆ ಫೋನ್ ಕರೆ ಮಾಡಿ ಈ ದಿನ ಸಂಜೆ ಮನೆಗೆ ವಾಪಾಸು ಬರುವುದಾಗಿ ತಿಳಿಸಿ ನಂತರ ನಾಪತ್ತೆಯಾಗಿದ್ದ. ಆತನ ಮೊಬೈಲ್ ಫೋನ್‌ಗೆ ಕರೆ ಮಾಡಿದರೂ ಆತನು ಸಂಪರ್ಕಕ್ಕೆ ಸಿಗಲಿಲ್ಲ. ಎಂದು ಆತನ ತಂದೆ ಬೆಳ್ತಂಗಡಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!