Friday, June 5, 2026
Homeತಾಜಾ ಸುದ್ದಿಮುಲ್ಕಿ: ಕಾರ್ನಾಡ್ ನಲ್ಲಿ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಬಾಟೆಲಿಗಳಿಂದ ನಿರ್ಮಾಣವಾಗುತ್ತಿದೆ ಪರಿಸರಸ್ನೇಹಿ ಬೆಂಚ್!

ಮುಲ್ಕಿ: ಕಾರ್ನಾಡ್ ನಲ್ಲಿ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಬಾಟೆಲಿಗಳಿಂದ ನಿರ್ಮಾಣವಾಗುತ್ತಿದೆ ಪರಿಸರಸ್ನೇಹಿ ಬೆಂಚ್!

- Advertisement -
- Advertisement -

ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡು ಗಾಂಧಿ ಮೈದಾನದಲ್ಲಿ ಮಂಗಳೂರಿನ ಸಿಒಡಿಪಿ ವತಿಯಿಂದ ಪರಿಸರಸ್ನೇಹಿ ಸಿಮೆಂಟ್ ಬೆಂಚ್ ನಿರ್ಮಾಣವಾಗ್ತಿದೆ.  ಪ್ಲಾಸ್ಟಿಕ್ ಬಾಟೆಲ್ ಹಾಗೂ ಸಂಗ್ರಹಿಸಿದ ತ್ಯಾಜ್ಯವನ್ನು ಉಪಯೋಗಿಸಿ ಈ ಕೆಲಸ ನಡೆಯುತ್ತಿದೆ.

ಈ ಬಗ್ಗೆ ಮಂಗಳೂರಿನ ಕ್ಯಾನ್ಸರ್ ಆರ್ಗನೈಸೇಷನ್ ಫಾರ್ ಡೆವಲಪ್ಮೆಂಟ್ ಅಂಡ್ ಪೀಸ್ ನ ಪುಷ್ಪವೇಣಿ ಮಾತನಾಡಿ ಪ್ರತಿ ಮನೆಗೆ ತೆರಳಿ ಜನರಿಗೆ ಪ್ಲಾಸ್ಟಿಕ್ ನಿಂದ ಆಗುವ ಅನಾಹುತದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 19 ಕಡೆ ಪರಿಸರಸ್ನೇಹಿ ಬೆಂಚ್ ನಿರ್ಮಾಣ ನಡೆದಿದೆ ಅಂದ್ರು. ಪ್ಲಾಸ್ಟಿಕ್ ಬಾಟಲಿ ಹಾಗೂ ತ್ಯಾಜ್ಯಗಳನ್ನು ಎಸೆಯುವ ಹಾಗೂ ಹೊತ್ತಿಸುವ ಬಗ್ಗೆ ಪ್ರತಿ ಮನೆಗೆ ತೆರಳಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗ್ತಿದೆ. ಪರಿಸರಸ್ನೇಹಿ ಬೆಂಚ್ ನಿರ್ಮಾಣದಿಂದ ಸಂಜೆ ಹೊತ್ತು ವಾಯುವಿಹಾರಕ್ಕೆ ಬರುವವರು ಕುಳಿತುಕೊಳ್ಳಲು ಅನುಕೂಲವಾಗಿದೆ ಎಂದರು.

- Advertisement -

Latest News

error: Content is protected !!