Friday, June 5, 2026
Homeಕರಾವಳಿಉಡುಪಿಉಡುಪಿ: ಎರಡು ತಿಂಗಳ ಬಡ ಹೆಣ್ಣುಮಗುವಿನ ಅಂತ್ಯ ಸಂಸ್ಕಾರ: ಮಾನವೀಯತೆ ಮೆರೆದ ನಾಗರಿಕ ಸಮಿತಿ

ಉಡುಪಿ: ಎರಡು ತಿಂಗಳ ಬಡ ಹೆಣ್ಣುಮಗುವಿನ ಅಂತ್ಯ ಸಂಸ್ಕಾರ: ಮಾನವೀಯತೆ ಮೆರೆದ ನಾಗರಿಕ ಸಮಿತಿ

- Advertisement -
- Advertisement -

ಉಡುಪಿ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಎರಡು ತಿಂಗಳ ಹೆಣ್ಣು ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ.

ಪೋಷಕರು ಅಂತ್ಯಸಂಸ್ಕಾರ ನಡೆಸಲು ಅಸಹಾಯಕ ಪರಿಸ್ಥಿತಿ ಎದುರಿಸುತ್ತಿರುವಾಗ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ನೆರವಿಗೆ ಬಂದು ಬೀಡಿನಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡಸಿಕೊಟ್ಟರು. ಖರ್ಚು ವೆಚ್ಚವನ್ನು ನಾಗರಿಕ ಸಮಿತಿ ಭರಿಸುವ ಮೂಲಕ ಮಾನವೀಯತೆ ಮೆರೆದಿದೆ.

- Advertisement -

Latest News

error: Content is protected !!