Wednesday, June 3, 2026
Homeಕರಾವಳಿಉಡುಪಿಈಗಿರುವ ಸಂಪ್ರದಾಯವನ್ನು ಬದಲಿಸಿ ವಿಷಬೀಜ ಬಿತ್ತಲು ಷಡ್ಯಂತ್ರ ನಡೆಸುತ್ತಿರುವುದು ವಿಷಾದನೀಯ: ಡಿ ಕೆ ಶಿವಕುಮಾರ್

ಈಗಿರುವ ಸಂಪ್ರದಾಯವನ್ನು ಬದಲಿಸಿ ವಿಷಬೀಜ ಬಿತ್ತಲು ಷಡ್ಯಂತ್ರ ನಡೆಸುತ್ತಿರುವುದು ವಿಷಾದನೀಯ: ಡಿ ಕೆ ಶಿವಕುಮಾರ್

- Advertisement -
- Advertisement -

ಬೆಂಗಳೂರು: “ಹಿಜಾಬ್ ವಿವಾದದಿಂದ ನಮ್ಮ ದೇಶಕ್ಕೆ ಅವಮಾನವಾಗಿದೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೋಮವಾರ ಫೆಬ್ರವರಿ 7 ರಂದು ಹೇಳಿದರು.

ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಶಿವಕುಮಾರ್, ನಮ್ಮ ಕರಾವಳಿ ಪ್ರದೇಶಕ್ಕೆ ತನ್ನದೇ ಆದ ಇತಿಹಾಸವಿದ್ದು, ಸಂಸ್ಕೃತಿ, ಮಾನವ ಸಂಪನ್ಮೂಲ ಹೊಂದಿದ್ದು, ಹಿಂದಿನಿಂದಲೂ ಶೈಕ್ಷಣಿಕ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈಗಿರುವ ಸಂಪ್ರದಾಯವನ್ನು ಬದಲಿಸಿ ವಿಷಬೀಜ ಬಿತ್ತಲು ಷಡ್ಯಂತ್ರ ನಡೆಸುತ್ತಿರುವುದು ವಿಷಾದನೀಯ. ಇದನ್ನು ಹೊರತುಪಡಿಸಿ, ನಿರುದ್ಯೋಗ, ಪೆಟ್ರೋಲ್ ಬೆಲೆ ಏರಿಕೆ, ಸಿಮೆಂಟ್ ಬೆಲೆ ಏರಿಕೆಯಂತಹ ಹಲವಾರು ಸಮಸ್ಯೆಗಳು ನಮ್ಮಲ್ಲಿವೆ, ಇವುಗಳನ್ನು ಪರಿಹರಿಸಬೇಕಾಗಿದೆ.ಯುವಕರು ತಮ್ಮ ಜೀವನವನ್ನು ಶಾಂತಿಯುತವಾಗಿ ಬದುಕಲು ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು.

ಜಿಲ್ಲಾ ಉಸ್ತುವಾರಿ ಸಚಿವ ವಿ ಸುನೀಲ್ ಕುಮಾರ್ ಹಿಜಾಬ್ ಹೇಳಿಕೆಗೆ ಸಂಬಂಧಿಸಿದಂತೆ ಡಿ ಕೆ ಶಿವಕುಮಾರ್, “ಸುನೀಲ್ ಕುಮಾರ್ ಅವರು ವಿಧಾನಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ, ಅವರು ಅದನ್ನು ಪಾಲಿಸಬೇಕು” ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್.ಲೋಬೊ, ಮೊಹಿಯುದ್ದೀನ್ ಬಾವ, ಅಭಯಚಂದ್ರ ಜೈನ್, ಶಕುಂತಳಾ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ ಮತ್ತಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!