- Advertisement -
- Advertisement -
ಕಡಬ: ಚಿರತೆಯೊಂದು ಕೋಳಿ ಹಿಡಿಯಲೆಂದು ಬಂದು ಬಾವಿಗೆ ಬಿದ್ದ ಘಟನೆ ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆ ಎಂಬಲ್ಲಿ ಭಾನುವಾರದಂದು ಸಂಭವಿಸಿದೆ.
ಕೋಳಿ ಹಿಡಿಯಲು ಪ್ರಯತ್ನಿಸುತ್ತಿದ್ದ ವೇಳೆ ಚಿರತೆ ಅಚಾನಕ್ಕಾಗಿ ಕೋಳಿ ಸಮೇತವಾಗಿ ಬಾವಿಗೆ ಬಿದ್ದಿದ್ದು , ಕೋಳಿ ಸಾವನ್ನಪ್ಪಿದೆ.
ಚಿರತೆಯು ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಎಂಬವರ ಮನೆಯ ಸಮೀಪದ ಬಾವಿಗೆ ಬಿದ್ದಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಚಿರತೆಯ ರಕ್ಷಣಾ ಕಾರ್ಯ ಇನ್ನಷ್ಟೇ ಆರಂಭಗೊಳ್ಳಬೇಕಿದೆ
- Advertisement -