Sunday, June 7, 2026
Homeಕರಾವಳಿನೆಲ್ಯಾಡಿ; ಶ್ರೀರಾಮ ವಿದ್ಯಾಲಯದಲ್ಲಿ  ಶಿಕ್ಷಕರ ದಿನಾಚರಣೆ,  ಓಣಂ ಮತ್ತು ಸಾಮೂಹಿಕ  ಹುಟ್ಟು ಹಬ್ಬ ಆಚರಣೆ

ನೆಲ್ಯಾಡಿ; ಶ್ರೀರಾಮ ವಿದ್ಯಾಲಯದಲ್ಲಿ  ಶಿಕ್ಷಕರ ದಿನಾಚರಣೆ,  ಓಣಂ ಮತ್ತು ಸಾಮೂಹಿಕ  ಹುಟ್ಟು ಹಬ್ಬ ಆಚರಣೆ

- Advertisement -
- Advertisement -

ನೆಲ್ಯಾಡಿ; ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿಯಲ್ಲಿ  ಸೆಪ್ಟೆಂಬರ್  5 ಶುಕ್ರವಾರದಂದು ಶಿಕ್ಷಕರ ದಿನಾಚರಣೆ, ಓಣಂ ಮತ್ತು ಸಾಮೂಹಿಕ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. 

ಕಾರ್ಯಕ್ರಮದ ವೇದಿಕೆಯಲ್ಲಿ  ಮುಖ್ಯ ಅತಿಥಿಯಾಗಿ  ಉಪಸ್ಥಿತರಿದ್ದ ವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀಯುತ ಮೂಲಚಂದ್ರ ಕಾಂಚನ,  ಆಗಸ್ಟ್  ಮತ್ತು  ಸೆಪ್ಟೆಂಬರ್  ತಿಂಗಳಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ವಿದ್ಯಾರ್ಥಿಗಳಿಗೆ  ತಿಲಕವನ್ನು ಇಟ್ಟು  ಸಿಹಿ    ಹಾಗೂ ಶಿಕ್ಷಕರ ದಿನಾಚರಣೆ ಪ್ರಯುಕ್ತ ಎಲ್ಲಾ ಶಿಕ್ಷಕರಿಗೆ ಹೂವನ್ನು ನೀಡಿ ಶುಭ ಹಾರೈಸಿದರು. ಶಿಕ್ಷಕಿ ಶ್ರೀಮತಿ  ಸೂರ್ಯ  ರವರು ಓಣಂ ಹಬ್ಬದ  ಹಿನ್ನೆಲೆ ಹಾಗೂ  ಮಹತ್ವವನ್ನು  ತಿಳಿಸಿದರು.

ವಿದ್ಯಾರ್ಥಿಗಳು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು ಎಲ್ಲಾ  ಶಿಕ್ಷಕರು ಮತ್ತು  ಸಿಬ್ಬಂದಿ ವರ್ಗದವರ  ಪಾದಪೂಜೆಯನ್ನು  ಮಾಡುವ ಮೂಲಕ  ಗುರು ಶಿಷ್ಯರ ಬಾಂಧವ್ಯವನ್ನು ಸದೃಢಗೊಳಿಸಿದರು. ಈ ಸಂದರ್ಭದಲ್ಲಿ  ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕಿ ಶ್ರೀಮತಿ ಕಾವ್ಯರವರು  ಮಾತನಾಡಿ,  ‘ಕೇವಲ  ಸರ್ಟಿಫಿಕೆಟ್ ಗಾಗಿ  ಶಿಕ್ಷಣ  ಪಡೆಯದೆ  ಸಮಾಜದಲ್ಲಿ  ಸುಸಂಸ್ಕೃತ  ವ್ಯಕ್ತಿಗಳಾಗಿ  ಬಾಳಿರಿ ‘ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ವೇದಿಕೆಯಲ್ಲಿ  ಕನ್ನಡ ಮಾಧ್ಯಮ ವಿಭಾಗದ  ಪ್ರಭಾರ  ಮುಖ್ಯ ಶಿಕ್ಷಕಿ ಶ್ರೀಮತಿ  ಭಾಗೀರಥಿ  ಉಪಸ್ಥಿತರಿದ್ದರು. ಚೈತನ್ಯ. ಎಚ್ ಸ್ವಾಗತಿಸಿ, ಬೃಂದಾ  ವಂದಿಸಿದರು. ಯಶ್ವಿನ್  ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಶಿಕ್ಷಕರ ದಿನಾಚರಣೆ ಪ್ರಯುಕ್ತ  ವಿದ್ಯಾರ್ಥಿಗಳು ಶಿಕ್ಷಕರಿಗೆ ವಿವಿಧ ಮನೋರಂಜನಾ  ಆಟಗಳನ್ನು  ನಡೆಸಿ  ಬಹುಮಾನ  ವಿತರಿಸಿದರು.ಓಣಂ ಪ್ರಯುಕ್ತ  ಮಧ್ಯಾಹ್ನದ ಭೋಜನಕ್ಕೆ  ವಿಶೇಷ  ಖಾದ್ಯಗಳನ್ನು  ಆಯೋಜಿಸಲಾಗಿತ್ತು.

- Advertisement -

Latest News

error: Content is protected !!