Friday, June 27, 2025
Homeಕರಾವಳಿಕಡಬ; ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ರಾಮಕುಂಜದ ಯುವಕ ಸಾವು

ಕಡಬ; ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ರಾಮಕುಂಜದ ಯುವಕ ಸಾವು

spot_img
- Advertisement -
- Advertisement -

ಕಡಬ; ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ರಾಮಕುಂಜದಲ್ಲಿ ನಡೆದಿದೆ.

ಕಡಬ ತಾಲೂಕು ರಾಮಕುಂಜದ ಬರಮೇಲು ನಿವಾಸಿ ಯಶೋಧರ (36) ಮೃತ ಯುವಕ. ಅನಾರೋಗ್ಯದಿಂದಾಗಿ ಯಶೋಧರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಊರಿಗೆ ಬಂದಿದ್ದ ಯಶೋಧರ ಅವರು 10 ದಿನಗಳ ಹಿಂದ ಮತ್ತೆ ಬೆಂಗಳೂರಿಗೆ ತೆರಳಿದ್ದರು.ಅಲ್ಲಿ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ.ಅಲ್ಲಿ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬಳಿಕ ಅವರ ಮೃತದೇಹವನ್ನು ರಾಮಕುಂಜದ ಅವರ ಮನೆಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

- Advertisement -
spot_img

Latest News

error: Content is protected !!