- Advertisement -
- Advertisement -
ಬೆಳ್ತಂಗಡಿ: ಶಿಬಾಜೆ ಗ್ರಾಮದ ಪ್ರತೀಕ್ಷಾ ಕೆಲ ದಿನಗಳ ಹಿಂದೆ ಸ್ಟೇ ವಯರ್ ಗೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದು, ಇದೀಗ ಆಕೆಯ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜಾ ರೂ.5.00 ಲಕ್ಷ ಮೊತ್ತದ ಪರಿಹಾರ ಧನದ ಚೆಕ್ ವಿತರಿಸಿ ಸಾಂತ್ವನ ತಿಳಿಸಿದರು.
ಪರಿಹಾರ ಧನದ ಚೆಕ್ ಅನ್ನು ಪ್ರತೀಕ್ಷಾಳ ತಂದೆ ಗಣೇಶ್ ಶೆಟ್ಟಿ ಹಾಗೂ ತಾಯಿ ರೋಹಿಣಿ ಅವರಿಗೆ ಶಾಸಕ ಹರೀಶ್ ಪೂಂಜಾ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪ್ರತೀಕ್ಷಾಳ ತಂಗಿ, ತಮ್ಮ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.
- Advertisement -