- Advertisement -
- Advertisement -
ಬೆಳ್ತಂಗಡಿ: ಯುವ ವಕೀಲ ಕುಲ್ ದೀಪ್ ಶೆಟ್ಟಿ ಅವರ ಮೇಲೆ ಬಂಟ್ವಾಳದ ಪುಂಜಾಲಕಟ್ಟೆ ಠಾಣೆಯ ಪೊಲೀಸರು ದೌರ್ಜನ್ಯ ಎಸಗಿರುವುದನ್ನ ಖಂಡಿಸಿ ಬೆಳ್ತಂಗಡಿಯ ಯುವ ವಕೀಲರ ವೇದಿಕೆ ಕುಲ್ ದೀಪ್ ಶೆಟ್ಟಿಯವರಿಗೆ ನೈತಿಕ ಬೆಂಬಲ ಸೂಚಿಸಿದೆ.
ಇಂದು ಬೆಳಿಗ್ಗೆ 10.45 ಕ್ಕೆ ವಕೀಲರ ಭವನದ ಮುಂಭಾಗದಲ್ಲಿ ಅನ್ಯಾಯಕ್ಕೊಳಗಾದ ಯುವ ವಕೀಲರಾದ ಶ್ರೀ ಕುಲ್ ದೀಪ್ ಶೆಟ್ಟಿ ಯವರಿಗೆ ನಮ್ಮ ನೈತಿಕ ಬೆಂಬಲ ಎಂಬ ಬ್ಯಾನರ್ ಹಿಡಿದು ಬೆಂಬಲ ಸೂಚಿಸಿದ್ರು. ಈ ವೇಳೆ ಅಧ್ಯಕ್ಷ ಪ್ರಶಾಂತ್ ಎಂ. ಕಾರ್ಯದರ್ಶಿ ನವೀನ್ ಬಿ. ಕೆ. ಪದಾಧಿಕಾರಿಗಳು, ವಕೀಲರು ಭಾಗವಹಿಸಿದರು.
- Advertisement -