- Advertisement -
- Advertisement -
ಬಂಟ್ವಾಳ: ಕರಿಯಂಗಳ ಗ್ರಾಮದ ಸಾಣೂರುಪದವಿನ ಪಲ್ಲಿಪಾಡಿಯಲ್ಲಿ ನಿರ್ಮಾಣವಾಗಲಿರುವ ರಾಮಕೃಷ್ಣ ವಿದ್ಯಾದೇಗುಲಕ್ಕೆ ಇಂದು ಭೂಮಿ ಪೂಜೆ ನಡೆಯಿತು.
ಭೂಮಿ ಪೂಜೆ ಮತ್ತು ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳೆಪ್ಪಾಡಿ ಮತ್ತು ಮಾಜಿ ಸಚಿವ ಬಿ. ರಮಾನಾಥ ರೈ ಪಾಲ್ಗೊಂಡಿದ್ದರು.
ವಿವೇಕ ಚೈತಾನ್ಯಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ
ಪೊಳಲಿ ಶ್ರೀ ರಾಮಕೃಷ್ಣ ತಪೋವನದ ವತಿಯಿಂದ ರಾಮಕೃಷ್ಣ ವಿದ್ಯಾದೇಗುಲ ನಿರ್ಮಾಣಗೊಳ್ಳಲಿದೆ.
ಆಧುನಿಕ ಮತ್ತು ಗುರುಕುಲ ಮಾದರಿಯ ಹೈಟೆಕ್ ಶಿಕ್ಷಣಕ್ಕೆ ಒತ್ತು ನೀಡುವ ಆಶಯದಿಂದ ನೂತನ ಶಿಕ್ಷಣ ಸಂಸ್ಥೆ ನಿರ್ಮಾಣವಾಗುತ್ತಿದೆ.
- Advertisement -