ಬಂಟ್ವಾಳ: ಅಮ್ಮುಂಜೆಯ ಕಳ್ಳಭಟ್ಟಿ ಅಡ್ಡೆಗೆ ದಾಳಿ, ಇಬ್ಬರ ಬಂಧನ

ಬಂಟ್ವಾಳ: ಮನೆಯೊಂದರ ಹಿಂಬದಿಯಲ್ಲಿ ನಡೆಯುತ್ತಿದ್ದ ಕಳ್ಳಭಟ್ಟಿ ಅಡ್ಡೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ ಘಟನೆ ದಕ್ಷಿಣ ಕನ್ನಡದ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವಿನಲ್ಲಿ ನಡೆದಿದೆ. ಕಿರಣ್‌ಕುಮಾರ್ ಹಾಗೂ ಕ್ರಿಸ್ಟನ್ ಡಿಸೋಜಾ ಬಂಧಿತರು. ಬೆಂಜನಪದವಿನಲ್ಲಿ ಕ್ರಿಸ್ಟನ್ ಡಿಸೋಜಾರ ಮನೆಯ ಹಿಂಭಾಗದಲ್ಲಿ ಈ ಧಂದೆ ನಡೆಯುತ್ತಿತ್ತು. ಖಚಿತ ಮಾಹಿತಿಯ ಆಧಾರದ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಕಳ್ಳಭಟ್ಟಿ ತಯಾರಿ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳದಲ್ಲಿದ್ದ 1200 ಲೀಟರ್ ಬೆಲ್ಲದ … Continue reading ಬಂಟ್ವಾಳ: ಅಮ್ಮುಂಜೆಯ ಕಳ್ಳಭಟ್ಟಿ ಅಡ್ಡೆಗೆ ದಾಳಿ, ಇಬ್ಬರ ಬಂಧನ