ಕಲ್ಯಾಣ್: ಸಂಕಷ್ಟದಲ್ಲಿರುವ ಹೋಟೆಲ್ ಕಾರ್ಮಿಕರಿಗೆ ಕಿಟ್ ವಿತರಿಸಿದ ಶಿವಸೇನೆ ದಕ್ಷಿಣ ಭಾರತೀಯ ಘಟಕ

ಮುಂಬೈ: ನಗರದ ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದ ಡಾ. ಶ್ರೀಕಾಂತ್ ಮತ್ತು ರಾಜ್ಯ ಸರ್ಕಾರದ ಸಚಿವ ಏಕನಾಥ ಶಿಂದೆಯವರ ವತಿಯಿಂದ ಪ್ರಸ್ತುತ ಲಾಕ್ ಡೌನ್ ನಿಂದಾಗಿ ತೊಂದರೆಯಲ್ಲಿ ಸಿಲುಕಿರುವ ಹೋಟೇಲ್ ಕಾರ್ಮಿಕ ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಯಿತು. ಈ ಮಹತ್ಕಾರ್ಯದ ನೇತೃತ್ವವನ್ನು ಥಾಣೆ ಜಿಲ್ಲಾ ಶಿವಸೇನೆಯ ದಕ್ಷಿಣ ಭಾರತೀಯ ಘಟಕದ ಕಾರ್ಯಾದ್ಯಕ್ಷ ಜಯ.ಕೆ.ಪೂಜಾರಿ, ಉಪಾದ್ಯಕ್ಷ ಸುಭಾಷ್ ಶೆಟ್ಟಿ, ಥಾಣೆ ಜಿಲ್ಲಾ ಶಿವಸೇನೆಯ ದಕ್ಷಿಣ ಭಾರತೀಯ ಘಟಕದ ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶ್ರೀಮತಿ ಅನುಪಮ ಶೆಟ್ಟಿ ವಹಿಸಿಕೊಂಡಿದ್ದರು.