ಕಲ್ಯಾಣ್: ಸಂಕಷ್ಟದಲ್ಲಿರುವ ಹೋಟೆಲ್ ಕಾರ್ಮಿಕರಿಗೆ ಕಿಟ್ ವಿತರಿಸಿದ ಶಿವಸೇನೆ ದಕ್ಷಿಣ ಭಾರತೀಯ ಘಟಕ
ಮುಂಬೈ: ನಗರದ ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದ ಡಾ. ಶ್ರೀಕಾಂತ್ ಮತ್ತು ರಾಜ್ಯ ಸರ್ಕಾರದ ಸಚಿವ ಏಕನಾಥ ಶಿಂದೆಯವರ ವತಿಯಿಂದ ಪ್ರಸ್ತುತ ಲಾಕ್ ಡೌನ್ ನಿಂದಾಗಿ ತೊಂದರೆಯಲ್ಲಿ ಸಿಲುಕಿರುವ ಹೋಟೇಲ್ ಕಾರ್ಮಿಕ ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಯಿತು. ಈ ಮಹತ್ಕಾರ್ಯದ ನೇತೃತ್ವವನ್ನು ಥಾಣೆ ಜಿಲ್ಲಾ ಶಿವಸೇನೆಯ ದಕ್ಷಿಣ ಭಾರತೀಯ ಘಟಕದ ಕಾರ್ಯಾದ್ಯಕ್ಷ ಜಯ.ಕೆ.ಪೂಜಾರಿ, ಉಪಾದ್ಯಕ್ಷ ಸುಭಾಷ್ ಶೆಟ್ಟಿ, ಥಾಣೆ ಜಿಲ್ಲಾ ಶಿವಸೇನೆಯ ದಕ್ಷಿಣ ಭಾರತೀಯ ಘಟಕದ ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶ್ರೀಮತಿ ಅನುಪಮ ಶೆಟ್ಟಿ ವಹಿಸಿಕೊಂಡಿದ್ದರು.
Copy and paste this URL into your WordPress site to embed
Copy and paste this code into your site to embed