ಕೊರೊನಾ ವೈರಸ್ ಇಡೀ ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿದೆ. 4 ಲಕ್ಷಕ್ಕೂ ಹೆಚ್ಚು ಮಂದಿ ಈ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಗಡ್ಡದಾರಿಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ಸಿಡಿಸಿ ಪ್ರಕಾರ, ಕರೋನಾ ವೈರಸ್ ತಡೆಗಟ್ಟಲು ಹೆಚ್ಚು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಹೊರಗೆ ಬರುವಾಗ ಮಾಸ್ಕ್ ಧರಿಸಬೇಕು. ಯಾವುದೇ ವಸ್ತು ಮುಟ್ಟಿದ್ರೂ ಕೈ ತೊಳೆಯಬೇಕು. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಗಡ್ಡ ಬಿಡುವ ಪ್ರವೃತ್ತಿ ಇದೆ. ಈ ಗಡ್ಡ ಸೋಂಕು ತಗಲಲು ಕಾರಣವಾಗುತ್ತದೆ.
ಮಾಸ್ಕ್ ಧರಿಸುವ ವೇಳೆ ಗಡ್ಡ ಅಡ್ಡಿ ಮಾಡುತ್ತದೆ. ಗಡ್ಡದಿಂದಾಗಿ ವ್ಯಕ್ತಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ಗಡ್ಡದ ಜೊತೆ ಮೀಸೆ ಬಿಡುವವರ ಮುಖಕ್ಕೂ ಮಾಸ್ಕ್ ಫಿಟ್ ಆಗುವುದಿಲ್ಲ. ನ್ಯೂಯಾರ್ಕ್ ವಿಶ್ವವಿದ್ಯಾಲಯದ ಲ್ಯಾಂಗೊನ್ ವೈದ್ಯಕೀಯ ಕೇಂದ್ರದ ಅಲರ್ಜಿ ಮತ್ತು ಸಾಂಕ್ರಾಮಿಕ ತಜ್ಞ ಈಸ್ಟರ್ನ್ ಪಾರಿಖ್ ಉಗುರುಗಳು ಎಷ್ಟು ಅಪಾಯಕಾರಿ ಎಂಬುದನ್ನು ಸ್ವಲ್ಪ ದಿನಗಳ ಹಿಂದೆ ಹೇಳಿದ್ದರು. ಉಗುರು ಕಚ್ಚುವವರಿಗೆ ವೈರಸ್ ಬೇಗ ತಗಲುತ್ತದೆ ಎಂದವರು ಹೇಳಿದ್ದರು.